anandamaya ee jagahrudaya / ಆನಂದಮಯ ಈ ಜಗಹೃದಯ

Genre

Lyricist

Composer

ಆನಂದಮಯ ಈ ಜಗಹೃದಯ” ಕವನವನ್ನು ರಾಷ್ಟ್ರಕವಿ ಕುವೆಂಪು ಬರೆದಿದ್ದು, ಅವರ ಅಖಿಲ ಭಾರತಿ ಭಾಷಾ ಮತ್ತು ವಿಶ್ವಮಾನವ ತತ್ವದ ಪ್ರತಿಫಲನವಾಗಿದೆ. ಈ ಕಾವ್ಯದಲ್ಲಿ ಕುವೆಂಪು ಪ್ರಕೃತಿಯನ್ನು ದೇವರ ರೂಪವಾಗಿ ಕಾಣುತ್ತಾರೆ—ಸೂರ್ಯ, ಚಂದ್ರ, ಬೆಳಕು, ಬಿಸಿಲು ಎಲ್ಲವೂ ದೇವರ ದಯೆಯ ಪ್ರತಿಬಿಂಬವೆಂದು ಹೇಳಿದ್ದಾರೆ. ಮನುಷ್ಯನು ಭಯ, ಭ್ರಾಂತಿ, ದುಃಖಗಳಿಂದ ಮುಕ್ತನಾಗಿ ಪ್ರಕೃತಿಯಲ್ಲೇ ಶಿವನ ಸೌಂದರ್ಯವನ್ನು ಕಾಣಬೇಕು ಎಂಬ ತತ್ವವನ್ನು ಹಾಡು ಸಾರುತ್ತದೆ. ಬಳಿಕ ಈ ಕಾವ್ಯಕ್ಕೆ ಸಿ. ಅಶ್ವತ್ ಸಂಗೀತ ನೀಡಿದ್ದಾರೆ ಮತ್ತು ಡಾ. ಶಿಮೋಗ ಸುಬ್ಬಣ್ಣ ಅವರ ಭಾವಪೂರ್ಣ ಧ್ವನಿಯಲ್ಲಿ ಪ್ರಸಿದ್ಧಿಯಾಗಿದೆ. ಇದು ಕೇವಲ ಒಂದು ಭಕ್ತಿಗೀತೆ ಮಾತ್ರವಲ್ಲ, ಬದಲಿಗೆ ಭಕ್ತಿ, ತತ್ತ್ವ, ಮತ್ತು ಮಾನವತೆಯ ಸಮನ್ವಯದ ಗೀತೆ, ಕನ್ನಡ ಸಾಹಿತ್ಯ ಮತ್ತು ಸಂಗೀತದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಆನಂದಮಯ ಈ ಜಗ ಹೃದಯ
ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ
ದೇವರ ದಯೆ ಕಾಣೋ
ಆನಂದಮಯ ಈ ಜಗ ಹೃದಯ
ಬಿಸಿಲಿದು ಬರಿ ಬಿಸಿಲಲ್ಲವೋ
ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ
ಆ ಭ್ರಾಂತಿಯ ಮಾಣೋ

ರವಿವದನವೇ ಶಿವ ಸದನವೋ
ಬರಿ ಕಣ್ಣದು ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ
ಶವಮುಖದಾ ಕಣ್ಣೋ
ಆನಂದಮಯ ಈ ಜಗ ಹೃದಯ…

ಉದಯದೊಳೇನ್ ಹೃದಯವ ಕಾಣ್
ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ

ಆನಂದಮಯ ಈ ಜಗ ಹೃದಯ…
ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ
ದೇವರ ದಯೆ ಕಾಣೋ
ಆನಂದಮಯ ಈ ಜಗ ಹೃದಯ…

Aanandamaya ee jaga hrudaya Etake bhaya mano Suryodaya chandrodhaya Devara krupe kanno Aanandamaya ee jaga hrudaya Bisilidu bari bisilallavo Suryana krupe kanno Surynu bari ravi yallavo Aa bhranthiya mano Ravivadanave shiva sadanavo Bari kannadu manno Shivanillade soundaryave Shavamukhada kanno Aanandamaya ee jaga hrudaya Udayadolēn hrudayava kaano Ade amrutada hanno Shiva kanade kavi kurudano Shiva kavyada kanno Aanandamaya ee jaga hrudaya Etake bhaya mano Suryodaya chandrodhaya Devara krupe kanno Aanandamaya ee jaga hrudaya

Search